ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸ್ವರಾಜ್ ದ್ವೀಪ್ನಲ್ಲಿ ಸಮುದ್ರದ ನೀರಿನಲ್ಲಿ ಅತಿ ದೊಡ್ಡ ರಾಷ್ಟ್ರಧ್ವಜ ಹಾರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಬೆಂಗಳೂರಿನ ಶರತ್ ಅಶೋಕ್ ಅವರನ್ನು ಅಂಡಮಾನ್ ಮತ್ತು ನಿಕೋಬಾರ್ನ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ. ಜೋಶಿ ಸನ್ಮಾನಿಸಿದರು.
ಸ್ವರಾಜ್ ದ್ವೀಪ್ನ ಸಮುದ್ರದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಶರತ್ ಅಶೋಕ್ ದೇಶದ ಗಮನ ಸೆಳೆದಿದ್ದಾರೆ. ಅವರ ಈ ಸಾಹಸ ಮತ್ತು ದೇಶಭಕ್ತಿಯ ಪ್ರಯತ್ನಕ್ಕೆ ವಿವಿಧ ವಲಯಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಷ್ಟ್ರಧ್ವಜದ ಗೌರವವನ್ನು ಸಾರುವ ಈ ವಿಶೇಷ ಸಾಧನೆ ಗಮನಾರ್ಹವಾಗಿದೆ.
ಐತಿಹಾಸಿಕ ಸಾಧನೆಗಾಗಿ ಶರತ್ ಅಶೋಕ್ ಅವರನ್ನು ಸನ್ಮಾನಿಸಿದ ಅಡ್ಮಿರಲ್ ಡಿ.ಕೆ. ಜೋಶಿ, ಅವರ ಸಾಧನೆಯನ್ನು ಶ್ಲಾಘಿಸಿದರು. ಸಮುದ್ರದ ನೀರಿನಲ್ಲಿ ರಾಷ್ಟ್ರಧ್ವಜ ಹಾರಿಸುವ ಈ ವಿಶಿಷ್ಟ ಪ್ರಯತ್ನವು ದೇಶದ ಯುವಕರಲ್ಲಿ ರಾಷ್ಟ್ರಪ್ರೇಮ ಹಾಗೂ ಸಾಹಸ ಮನೋಭಾವವನ್ನು ಉತ್ತೇಜಿಸುವಂತಿದೆ.










