ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (International Airport) ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಈಗಾಗಲೇ ಇರುವ ಕೆಂಪೇಗೌಡ ವಿಮಾನ ನಿಲ್ದಾಣದ (Kempegowda Airport) ಮೇಲಿನ ಹೊರೆ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿತ್ತು. ಈ ಸಂಬಂಧ ಇಂದು ಸಿಎಂ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ರು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, 2ನೇ ಏರ್ಪೋರ್ಟ್ ಬೆಂಗಳೂರು ದಕ್ಷಿಣಕ್ಕೆ ಹೋಗಲಿದೆ ಎಂದು ಹೇಳಿದ್ರು. ಇದನ್ನೂ ಓದಿ: ಕೇಂದ್ರ ಆಹಾರ ಸಚಿವಾಲಯದಿಂದ 4,422 ಕೋಟಿ ಬಿಡುಗಡೆಗೆ ಮನವಿ ಮಾಡಿದ್ದೇನೆ – ಸಚಿವ ಕೆ.ಹೆಚ್ ಮುನಿಯಪ್ಪ
ಅಧಿಕಾರಿಗಳಿ ಈ ಹಿಂದೆ ಏನಾಗಿತ್ತು ಅನ್ನೋದ್ರ ವರದಿಯನ್ನ ಸಭೆಯಲ್ಲಿ ಕೊಟ್ಟಿದ್ದಾರೆ. ಆದಷ್ಟು ಊರುಗಳನ್ನ ಸ್ಥಳಾಂತರ ಮಾಡುವಂತಹ ಕೆಲಸ ಆಗಬಾರದು, ಗುಡ್ಡಗಳು ಇರಬಾರದು ಅಂತಹ ಕಡೆ ಜಾಗಗಳನ್ನ ನೋಡಿ ಅಂತ ಹೇಳಿದ್ದೇನೆಂದು ತಿಳಿಸಿದ್ರು










