ಗ್ಯಾರಂಟಿ ಮಾತ್ರವಲ್ಲದೆ ಮಹಿಳೆಯರಿಗಾಗಿ ಹತ್ತಾರು ಯೋಜನೆ ಜಾರಿಗೊಳಿಸಲಿದ್ದೇವೆ, ನಿಮ್ಮ ಜೊತೆಗೆ ಡಿಕೆಶಿ ಹಾಗೂ ಸರ್ಕಾರ ಸದಾ ಇರಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಭರವಸೆ ನೀಡಿದರು.
ಬಸವಕಲ್ಯಾಣದಲ್ಲಿ (Basava Kalyana) ಆಯೋಜಿಸಲಾಗಿದ್ದ ಅಕ್ಕಪಡೆ ಮಹಿಳಾ ಶಕ್ತಿ ಪ್ರದರ್ಶನ ಕಾರ್ಯಕ್ರಮಕ್ಕೆ ಸಿಎಂ ಡಿಕೆ ಶಿವಕುಮಾರ್ ಮತ್ತು ಡಿಸಿಎಂ ಜಿ.ಪರಮೇಶ್ವರ್ (G Parameshwar) ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ನೂತನ ಲೋಗೋವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಅಕ್ಕಪಡೆಯಿಂದ ರೋಮಾಂಚನಕಾರಿ ಮಹಿಳಾ ಶಕ್ತಿ ಪ್ರದರ್ಶನ ಮತ್ತು ಎದುರಾಳಿಗಳಿಂದ ತಮ್ಮನ್ನು ತಾವು ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಆತ್ಮರಕ್ಷಣೆಯ ಬಗ್ಗೆ ಪ್ರದರ್ಶನ ನೀಡಿದರು.










