ಮೀಸಲು ಕಾನೂನು – ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಸ್ತ್ರೀ ಸಮಾವೇಶ: ಶೋಭಾ ಕರಂದ್ಲಾಜೆ ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಮೀಸಲು ಕಾನೂನು – ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಸ್ತ್ರೀ ಸಮಾವೇಶ: ಶೋಭಾ ಕರಂದ್ಲಾಜೆ ..

11 Apr 2026, 10:43 pm KANNADA SAKSHI

ಮಹಿಳಾ ಮೀಸಲಾತಿ ಜಾರಿ ಸಂಬಂಧ ಸಂಸತ್ ಅಧಿವೇಶನ ನಡೆಯಲಿದೆ. ನಾರಿ ಶಕ್ತಿ ವಂದನ್ ಮಸೂದೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ತಮ್ಮ ಹಕ್ಕಿನ ಬಗ್ಗೆ ಮುಂದಿನ 10 ದಿನಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ತಿಳಿಸಿದ್ದಾರೆ.

 

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ಸ್ವೀಕಾರ ಮಾಡಿ, ಮುಂದೆ ವಿವಿಧ ಕ್ಷೇತ್ರಗಳ ತಜ್ಞರನ್ನು ಗುರುತಿಸಿ, ಅವರಿಗೆ ಟಿಕೆಟ್ ಕೊಡುವಂತಾಗಲಿದೆ. ಮಹಿಳಾ ಮೀಸಲಾತಿ ಜಾರಿಗಾಗಿ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಮರ್ಪಿಸಿದರು. ಇದನ್ನೂ ಓದಿ: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆ ಆರಂಭ – ಇರಾನಿನ ಕೆಲ ಬೇಡಿಕೆಗಳಿಗೆ ಅಮೆರಿಕ ತಾತ್ವಿಕ ಒಪ್ಪಿಗೆ

 

 

ಮಹಿಳಾ ಮೀಸಲಾತಿ ಎಂಬುದು ಬಹಳ ವರ್ಷಗಳಿಂದ ಒಂದು ಕೂಗು, ಅಪೇಕ್ಷೆ, ಬೇಡಿಕೆಯಾಗಿತ್ತು. ಅದು ಈಡೇರುವ ವಿಚಾರದಲ್ಲಿ ಸಂಶಯವಿತ್ತು. ಸುಮಾರು 15 ವರ್ಷಗಳ ಹಿಂದೆ ಇದು ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ಕೆಲವು ರಾಜಕೀಯ ಪಕ್ಷದವರು ಮಸೂದೆಯ ಹಾಳೆಯನ್ನು ಹರಿದು ಹಾಕಿ, ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿರೋಧಿ ಮಾನಸಿಕತೆ ಮತ್ತು ದಾಷ್ಟ್ರ‍್ಯ ಇವೆರಡನ್ನೂ ತೋರಿಸಲಾಗಿತ್ತು. ಬಳಿಕ ಈ ಮಸೂದೆ ನೆನೆಗುದಿಗೆ ಬಿದ್ದಿತ್ತು. ಯುಪಿಎ 10 ವರ್ಷಗಳ ಅಧಿಕಾರದ ಅವಧಿಯಲ್ಲಿ ಇದನ್ನು ಮುಂದಕ್ಕೆ ತರಲಾಗಲಿಲ್ಲ. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ಮೇಲೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದರು ಎಂದು ವಿಶ್ಲೇಷಿಸಿದರು.

 

ಕರ್ನಾಟಕದ ಗ್ರಾಮ ಪಂಚಾಯಿತಿಗಳ ಅತ್ಯುತ್ತಮ ಸಾಧನೆ ಗಣನೆಗೆ ತೆಗೆದುಕೊಂಡರೆ ಮಹಿಳೆ ಅಧ್ಯಕ್ಷೆ ಆಗಿರುವ ಕಡೆ ಉತ್ಕೃಷ್ಟ ಸಾಧನೆ ಇತ್ತು. ಅಂಥಲ್ಲೇ ಪ್ರಶಸ್ತಿ ಲಭಿಸಿತ್ತು. ಸಂಸತ್ ಟಿಕೆಟ್ ವಿಚಾರದಲ್ಲಿ ಈಗಾಗಲೇ ಜನಪ್ರತಿನಿಧಿ ಆಗಿರುವವರಿಗೆ ಎಲ್ಲ ಪಕ್ಷಗಳು ಆದ್ಯತೆ ಕೊಡಲಿವೆ. ಈಗಿನಿಂದಲೇ ಗುರುತಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.

 

ಹಳದಿ ಗ್ಲಾಸ್ ಹಾಕಿಕೊಂಡ ಕಾಂಗ್ರೆಸ್:

ಕಾಂಗ್ರೆಸ್‌ ಹಳದಿ ಗ್ಲಾಸ್ ಹಾಕಿಕೊಂಡಿದೆ. ಅದರಿಂದ ಯಾವುದನ್ನು ನೋಡಿದರೂ ಹಳದಿ, ಚುನಾವಣೆಯೇ ಅವರಿಗೆ ಗೋಚರಿಸುತ್ತಿದೆ. ಮಹಿಳಾ ಮೀಸಲಾತಿ ಮಸೂದೆಯು ರಾಜ್ಯಗಳ ಚುನಾವಣೆ ಮೇಲೆ ಪ್ರಭಾವ ಬೀರುವುದೆಂದು ನನಗೆ ಅನಿಸುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಈ ಮಸೂದೆಗೆ ವಿರೋಧ ಇದ್ದಾರಾ ಅಥವಾ ಈಗ ಚರ್ಚೆ ಮಾಡುವುದಕ್ಕೆ ವಿರೋಧ ಇದ್ದಾರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

 

ಮಸೂದೆಗೆ ವಿರೋಧ, ಮೊಸಳೆ ಕಣ್ಣೀರು:

ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದ ಪಕ್ಷದಲ್ಲಿ ಸೋನಿಯಾ ಗಾಂಧಿಯವರು ಯುಪಿಎಯನ್ನು ನಿಯಂತ್ರಿಸುತ್ತಿದ್ದಾಗ ಮಹಿಳಾ ಮೀಸಲಾತಿ ಕುರಿತು ಚರ್ಚೆ ನಡೆಯಿತ. ಮೊಸಳೆ ಕಣ್ಣೀರು ಸುರಿಸಿದ್ದರು. ಕೆಲವು ಬಾರಿ ವಿರೋಧಿಸಿದ್ದರು. ಅವರಿಗೆ ಮಹಿಳೆ ಎಂದರೆ ಈಗ ಪ್ರಿಯಾಂಕ ಗಾಂಧಿ ಮಾತ್ರ. ಬೇರೆ ಮಹಿಳೆಯರು ಬರುವುದು ಅವರಿಗೆ ಅಗತ್ಯ ಇಲ್ಲ. ಪ್ರಿಯಾಂಕ ಗಾಂಧಿ ಬೇಕು. ಬೇರೆ ಮಹಿಳೆಯರಿಗೆ ಅವಕಾಶ ಬೇಡ ಎಂಬುದು ಕಾಂಗ್ರೆಸ್ಸಿನ ಮಾನಸಿಕತೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಹೊರತುಪಡಿಸಿ ಸಾಮಾನ್ಯ ಮಹಿಳೆಯರು ಸಂಸತ್ತಿಗೆ ಬರುವುದು ಅವರಿಗೆ ಬೇಕಾಗಿಲ್ಲ. ಈ ಮಾನಸಿಕತೆಯನ್ನು ಅವರು ಬದಲಿಸಿಕೊಳ್ಳಲಿ ಎಂದರು.

 

ಸಹಿ ಸಂಗ್ರಹ, ಮಿಸ್ಡ್ ಕಾಲ್ ಅಭಿಯಾನ: ಕು. ಸಿ.ಮಂಜುಳಾ

ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಸಿ.ಮಂಜುಳಾ ಅವರು ಮಾತನಾಡಿ, ನಾರಿ ಶಕ್ತಿ ವಂದನ್ ಎಂಬ ಕಾಯ್ದೆ ತರಲು ಪ್ರಧಾನಿಯವರು ಮುಂದಾಗಿದ್ದು, ಅವರಿಗೆ ಅಭಿನಂದನೆಗಳು. ಈ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಮೋರ್ಚಾದಿಂದ ಮಹಿಳಾ ಸಮಾವೇಶ ಆಯೋಜಿಸಲಾಗುವುದು. ಸಹಿ ಸಂಗ್ರಹವೂ ನಡೆಯಲಿದೆ. ನಾಳೆ ಕೆ.ಆರ್.ಪುರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಸಹಿ ಸಂಗ್ರಹ ಆರಂಭವಾಗುತ್ತದೆ. ಇದು ರಾಜ್ಯದಾದ್ಯಂತ ನಡೆಯಲಿದೆ. ಮಸೂದೆ ಬೆಂಬಲಿಸಲು ಮಿಸ್ಡ್ ಕಾಲ್ ಅಭಿಯಾನ ಮಾಡುತ್ತಿದ್ದೇವೆ. ವಿಭಾಗ ಮಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗುತ್ತದೆ. ಯುವ ಮೋರ್ಚಾದಿಂದ ಬೈಕ್, ಸ್ಕೂಟಿ ರ್ಯಾಲಿಗಳನ್ನು ಆಯೋಜಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

Generating image…

ಮಹಿಳಾ ಮೀಸಲಾತಿ ಜಾರಿ ಸಂಬಂಧ ಸಂಸತ್ ಅಧಿವೇಶನ ನಡೆಯಲಿದೆ. ನಾರಿ ಶಕ್ತಿ ವಂದನ್ ಮಸೂದೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ತಮ್ಮ ಹಕ್ಕಿನ ಬಗ್ಗೆ ಮುಂದಿನ 10 ದಿನಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ತಿಳಿಸಿದ್ದಾರೆ.

 

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ಸ್ವೀಕಾರ ಮಾಡಿ, ಮುಂದೆ ವಿವಿಧ ಕ್ಷೇತ್ರಗಳ ತಜ್ಞರನ್ನು ಗುರುತಿಸಿ, ಅವರಿಗೆ ಟಿಕೆಟ್ ಕೊಡುವಂತಾಗಲಿದೆ. ಮಹಿಳಾ ಮೀಸಲಾತಿ ಜಾರಿಗಾಗಿ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಮರ್ಪಿಸಿದರು. ಇದನ್ನೂ ಓದಿ: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆ ಆರಂಭ – ಇರಾನಿನ ಕೆಲ ಬೇಡಿಕೆಗಳಿಗೆ ಅಮೆರಿಕ ತಾತ್ವಿಕ ಒಪ್ಪಿಗೆ

 

 

ಮಹಿಳಾ ಮೀಸಲಾತಿ ಎಂಬುದು ಬಹಳ ವರ್ಷಗಳಿಂದ ಒಂದು ಕೂಗು, ಅಪೇಕ್ಷೆ, ಬೇಡಿಕೆಯಾಗಿತ್ತು. ಅದು ಈಡೇರುವ ವಿಚಾರದಲ್ಲಿ ಸಂಶಯವಿತ್ತು. ಸುಮಾರು 15 ವರ್ಷಗಳ ಹಿಂದೆ ಇದು ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ಕೆಲವು ರಾಜಕೀಯ ಪಕ್ಷದವರು ಮಸೂದೆಯ ಹಾಳೆಯನ್ನು ಹರಿದು ಹಾಕಿ, ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿರೋಧಿ ಮಾನಸಿಕತೆ ಮತ್ತು ದಾಷ್ಟ್ರ‍್ಯ ಇವೆರಡನ್ನೂ ತೋರಿಸಲಾಗಿತ್ತು. ಬಳಿಕ ಈ ಮಸೂದೆ ನೆನೆಗುದಿಗೆ ಬಿದ್ದಿತ್ತು. ಯುಪಿಎ 10 ವರ್ಷಗಳ ಅಧಿಕಾರದ ಅವಧಿಯಲ್ಲಿ ಇದನ್ನು ಮುಂದಕ್ಕೆ ತರಲಾಗಲಿಲ್ಲ. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ಮೇಲೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದರು ಎಂದು ವಿಶ್ಲೇಷಿಸಿದರು.

 

ಕರ್ನಾಟಕದ ಗ್ರಾಮ ಪಂಚಾಯಿತಿಗಳ ಅತ್ಯುತ್ತಮ ಸಾಧನೆ ಗಣನೆಗೆ ತೆಗೆದುಕೊಂಡರೆ ಮಹಿಳೆ ಅಧ್ಯಕ್ಷೆ ಆಗಿರುವ ಕಡೆ ಉತ್ಕೃಷ್ಟ ಸಾಧನೆ ಇತ್ತು. ಅಂಥಲ್ಲೇ ಪ್ರಶಸ್ತಿ ಲಭಿಸಿತ್ತು. ಸಂಸತ್ ಟಿಕೆಟ್ ವಿಚಾರದಲ್ಲಿ ಈಗಾಗಲೇ ಜನಪ್ರತಿನಿಧಿ ಆಗಿರುವವರಿಗೆ ಎಲ್ಲ ಪಕ್ಷಗಳು ಆದ್ಯತೆ ಕೊಡಲಿವೆ. ಈಗಿನಿಂದಲೇ ಗುರುತಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.

 

ಹಳದಿ ಗ್ಲಾಸ್ ಹಾಕಿಕೊಂಡ ಕಾಂಗ್ರೆಸ್:

ಕಾಂಗ್ರೆಸ್‌ ಹಳದಿ ಗ್ಲಾಸ್ ಹಾಕಿಕೊಂಡಿದೆ. ಅದರಿಂದ ಯಾವುದನ್ನು ನೋಡಿದರೂ ಹಳದಿ, ಚುನಾವಣೆಯೇ ಅವರಿಗೆ ಗೋಚರಿಸುತ್ತಿದೆ. ಮಹಿಳಾ ಮೀಸಲಾತಿ ಮಸೂದೆಯು ರಾಜ್ಯಗಳ ಚುನಾವಣೆ ಮೇಲೆ ಪ್ರಭಾವ ಬೀರುವುದೆಂದು ನನಗೆ ಅನಿಸುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಈ ಮಸೂದೆಗೆ ವಿರೋಧ ಇದ್ದಾರಾ ಅಥವಾ ಈಗ ಚರ್ಚೆ ಮಾಡುವುದಕ್ಕೆ ವಿರೋಧ ಇದ್ದಾರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

 

ಮಸೂದೆಗೆ ವಿರೋಧ, ಮೊಸಳೆ ಕಣ್ಣೀರು:

ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದ ಪಕ್ಷದಲ್ಲಿ ಸೋನಿಯಾ ಗಾಂಧಿಯವರು ಯುಪಿಎಯನ್ನು ನಿಯಂತ್ರಿಸುತ್ತಿದ್ದಾಗ ಮಹಿಳಾ ಮೀಸಲಾತಿ ಕುರಿತು ಚರ್ಚೆ ನಡೆಯಿತ. ಮೊಸಳೆ ಕಣ್ಣೀರು ಸುರಿಸಿದ್ದರು. ಕೆಲವು ಬಾರಿ ವಿರೋಧಿಸಿದ್ದರು. ಅವರಿಗೆ ಮಹಿಳೆ ಎಂದರೆ ಈಗ ಪ್ರಿಯಾಂಕ ಗಾಂಧಿ ಮಾತ್ರ. ಬೇರೆ ಮಹಿಳೆಯರು ಬರುವುದು ಅವರಿಗೆ ಅಗತ್ಯ ಇಲ್ಲ. ಪ್ರಿಯಾಂಕ ಗಾಂಧಿ ಬೇಕು. ಬೇರೆ ಮಹಿಳೆಯರಿಗೆ ಅವಕಾಶ ಬೇಡ ಎಂಬುದು ಕಾಂಗ್ರೆಸ್ಸಿನ ಮಾನಸಿಕತೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಹೊರತುಪಡಿಸಿ ಸಾಮಾನ್ಯ ಮಹಿಳೆಯರು ಸಂಸತ್ತಿಗೆ ಬರುವುದು ಅವರಿಗೆ ಬೇಕಾಗಿಲ್ಲ. ಈ ಮಾನಸಿಕತೆಯನ್ನು ಅವರು ಬದಲಿಸಿಕೊಳ್ಳಲಿ ಎಂದರು.

 

ಸಹಿ ಸಂಗ್ರಹ, ಮಿಸ್ಡ್ ಕಾಲ್ ಅಭಿಯಾನ: ಕು. ಸಿ.ಮಂಜುಳಾ

ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಸಿ.ಮಂಜುಳಾ ಅವರು ಮಾತನಾಡಿ, ನಾರಿ ಶಕ್ತಿ ವಂದನ್ ಎಂಬ ಕಾಯ್ದೆ ತರಲು ಪ್ರಧಾನಿಯವರು ಮುಂದಾಗಿದ್ದು, ಅವರಿಗೆ ಅಭಿನಂದನೆಗಳು. ಈ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಮೋರ್ಚಾದಿಂದ ಮಹಿಳಾ ಸಮಾವೇಶ ಆಯೋಜಿಸಲಾಗುವುದು. ಸಹಿ ಸಂಗ್ರಹವೂ ನಡೆಯಲಿದೆ. ನಾಳೆ ಕೆ.ಆರ್.ಪುರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಸಹಿ ಸಂಗ್ರಹ ಆರಂಭವಾಗುತ್ತದೆ. ಇದು ರಾಜ್ಯದಾದ್ಯಂತ ನಡೆಯಲಿದೆ. ಮಸೂದೆ ಬೆಂಬಲಿಸಲು ಮಿಸ್ಡ್ ಕಾಲ್ ಅಭಿಯಾನ ಮಾಡುತ್ತಿದ್ದೇವೆ. ವಿಭಾಗ ಮಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗುತ್ತದೆ. ಯುವ ಮೋರ್ಚಾದಿಂದ ಬೈಕ್, ಸ್ಕೂಟಿ ರ್ಯಾಲಿಗಳನ್ನು ಆಯೋಜಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

Editor Reporter
kannadasakshi.in

ಮೀಸಲು ಕಾನೂನು – ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಸ್ತ್ರೀ ಸಮಾವೇಶ: ಶೋಭಾ ಕರಂದ್ಲಾಜೆ ..

ಮಹಿಳಾ ಮೀಸಲಾತಿ ಜಾರಿ ಸಂಬಂಧ ಸಂಸತ್ ಅಧಿವೇಶನ ನಡೆಯಲಿದೆ. ನಾರಿ ಶಕ್ತಿ ವಂದನ್ ಮಸೂದೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ತಮ್ಮ ಹಕ್ಕಿನ ಬಗ್ಗೆ ಮುಂದಿನ 10 ದಿನಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ತಿಳಿಸಿದ್ದಾರೆ.

 

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ಸ್ವೀಕಾರ ಮಾಡಿ, ಮುಂದೆ ವಿವಿಧ ಕ್ಷೇತ್ರಗಳ ತಜ್ಞರನ್ನು ಗುರುತಿಸಿ, ಅವರಿಗೆ ಟಿಕೆಟ್ ಕೊಡುವಂತಾಗಲಿದೆ. ಮಹಿಳಾ ಮೀಸಲಾತಿ ಜಾರಿಗಾಗಿ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಮರ್ಪಿಸಿದರು. ಇದನ್ನೂ ಓದಿ: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆ ಆರಂಭ – ಇರಾನಿನ ಕೆಲ ಬೇಡಿಕೆಗಳಿಗೆ ಅಮೆರಿಕ ತಾತ್ವಿಕ ಒಪ್ಪಿಗೆ

 

 

ಮಹಿಳಾ ಮೀಸಲಾತಿ ಎಂಬುದು ಬಹಳ ವರ್ಷಗಳಿಂದ ಒಂದು ಕೂಗು, ಅಪೇಕ್ಷೆ, ಬೇಡಿಕೆಯಾಗಿತ್ತು. ಅದು ಈಡೇರುವ ವಿಚಾರದಲ್ಲಿ ಸಂಶಯವಿತ್ತು. ಸುಮಾರು 15 ವರ್ಷಗಳ ಹಿಂದೆ ಇದು ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ಕೆಲವು ರಾಜಕೀಯ ಪಕ್ಷದವರು ಮಸೂದೆಯ ಹಾಳೆಯನ್ನು ಹರಿದು ಹಾಕಿ, ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿರೋಧಿ ಮಾನಸಿಕತೆ ಮತ್ತು ದಾಷ್ಟ್ರ‍್ಯ ಇವೆರಡನ್ನೂ ತೋರಿಸಲಾಗಿತ್ತು. ಬಳಿಕ ಈ ಮಸೂದೆ ನೆನೆಗುದಿಗೆ ಬಿದ್ದಿತ್ತು. ಯುಪಿಎ 10 ವರ್ಷಗಳ ಅಧಿಕಾರದ ಅವಧಿಯಲ್ಲಿ ಇದನ್ನು ಮುಂದಕ್ಕೆ ತರಲಾಗಲಿಲ್ಲ. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ಮೇಲೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದರು ಎಂದು ವಿಶ್ಲೇಷಿಸಿದರು.

 

ಕರ್ನಾಟಕದ ಗ್ರಾಮ ಪಂಚಾಯಿತಿಗಳ ಅತ್ಯುತ್ತಮ ಸಾಧನೆ ಗಣನೆಗೆ ತೆಗೆದುಕೊಂಡರೆ ಮಹಿಳೆ ಅಧ್ಯಕ್ಷೆ ಆಗಿರುವ ಕಡೆ ಉತ್ಕೃಷ್ಟ ಸಾಧನೆ ಇತ್ತು. ಅಂಥಲ್ಲೇ ಪ್ರಶಸ್ತಿ ಲಭಿಸಿತ್ತು. ಸಂಸತ್ ಟಿಕೆಟ್ ವಿಚಾರದಲ್ಲಿ ಈಗಾಗಲೇ ಜನಪ್ರತಿನಿಧಿ ಆಗಿರುವವರಿಗೆ ಎಲ್ಲ ಪಕ್ಷಗಳು ಆದ್ಯತೆ ಕೊಡಲಿವೆ. ಈಗಿನಿಂದಲೇ ಗುರುತಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.

 

ಹಳದಿ ಗ್ಲಾಸ್ ಹಾಕಿಕೊಂಡ ಕಾಂಗ್ರೆಸ್:

ಕಾಂಗ್ರೆಸ್‌ ಹಳದಿ ಗ್ಲಾಸ್ ಹಾಕಿಕೊಂಡಿದೆ. ಅದರಿಂದ ಯಾವುದನ್ನು ನೋಡಿದರೂ ಹಳದಿ, ಚುನಾವಣೆಯೇ ಅವರಿಗೆ ಗೋಚರಿಸುತ್ತಿದೆ. ಮಹಿಳಾ ಮೀಸಲಾತಿ ಮಸೂದೆಯು ರಾಜ್ಯಗಳ ಚುನಾವಣೆ ಮೇಲೆ ಪ್ರಭಾವ ಬೀರುವುದೆಂದು ನನಗೆ ಅನಿಸುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಈ ಮಸೂದೆಗೆ ವಿರೋಧ ಇದ್ದಾರಾ ಅಥವಾ ಈಗ ಚರ್ಚೆ ಮಾಡುವುದಕ್ಕೆ ವಿರೋಧ ಇದ್ದಾರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

 

ಮಸೂದೆಗೆ ವಿರೋಧ, ಮೊಸಳೆ ಕಣ್ಣೀರು:

ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದ ಪಕ್ಷದಲ್ಲಿ ಸೋನಿಯಾ ಗಾಂಧಿಯವರು ಯುಪಿಎಯನ್ನು ನಿಯಂತ್ರಿಸುತ್ತಿದ್ದಾಗ ಮಹಿಳಾ ಮೀಸಲಾತಿ ಕುರಿತು ಚರ್ಚೆ ನಡೆಯಿತ. ಮೊಸಳೆ ಕಣ್ಣೀರು ಸುರಿಸಿದ್ದರು. ಕೆಲವು ಬಾರಿ ವಿರೋಧಿಸಿದ್ದರು. ಅವರಿಗೆ ಮಹಿಳೆ ಎಂದರೆ ಈಗ ಪ್ರಿಯಾಂಕ ಗಾಂಧಿ ಮಾತ್ರ. ಬೇರೆ ಮಹಿಳೆಯರು ಬರುವುದು ಅವರಿಗೆ ಅಗತ್ಯ ಇಲ್ಲ. ಪ್ರಿಯಾಂಕ ಗಾಂಧಿ ಬೇಕು. ಬೇರೆ ಮಹಿಳೆಯರಿಗೆ ಅವಕಾಶ ಬೇಡ ಎಂಬುದು ಕಾಂಗ್ರೆಸ್ಸಿನ ಮಾನಸಿಕತೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಹೊರತುಪಡಿಸಿ ಸಾಮಾನ್ಯ ಮಹಿಳೆಯರು ಸಂಸತ್ತಿಗೆ ಬರುವುದು ಅವರಿಗೆ ಬೇಕಾಗಿಲ್ಲ. ಈ ಮಾನಸಿಕತೆಯನ್ನು ಅವರು ಬದಲಿಸಿಕೊಳ್ಳಲಿ ಎಂದರು.

 

ಸಹಿ ಸಂಗ್ರಹ, ಮಿಸ್ಡ್ ಕಾಲ್ ಅಭಿಯಾನ: ಕು. ಸಿ.ಮಂಜುಳಾ

ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಸಿ.ಮಂಜುಳಾ ಅವರು ಮಾತನಾಡಿ, ನಾರಿ ಶಕ್ತಿ ವಂದನ್ ಎಂಬ ಕಾಯ್ದೆ ತರಲು ಪ್ರಧಾನಿಯವರು ಮುಂದಾಗಿದ್ದು, ಅವರಿಗೆ ಅಭಿನಂದನೆಗಳು. ಈ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಮೋರ್ಚಾದಿಂದ ಮಹಿಳಾ ಸಮಾವೇಶ ಆಯೋಜಿಸಲಾಗುವುದು. ಸಹಿ ಸಂಗ್ರಹವೂ ನಡೆಯಲಿದೆ. ನಾಳೆ ಕೆ.ಆರ್.ಪುರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಸಹಿ ಸಂಗ್ರಹ ಆರಂಭವಾಗುತ್ತದೆ. ಇದು ರಾಜ್ಯದಾದ್ಯಂತ ನಡೆಯಲಿದೆ. ಮಸೂದೆ ಬೆಂಬಲಿಸಲು ಮಿಸ್ಡ್ ಕಾಲ್ ಅಭಿಯಾನ ಮಾಡುತ್ತಿದ್ದೇವೆ. ವಿಭಾಗ ಮಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗುತ್ತದೆ. ಯುವ ಮೋರ್ಚಾದಿಂದ ಬೈಕ್, ಸ್ಕೂಟಿ ರ್ಯಾಲಿಗಳನ್ನು ಆಯೋಜಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS